ಶರತ್ ಬಚ್ಚೇಗೌಡ ಬೆಂಬಲಿಗನ ಕ್ರಷರ್ ವಿರುದ್ಧ ತಿರುಗಿಬಿದ್ದ ರೈತರು! ನಿಯಮ ಉಲ್ಲಂಘಿಸಿ ಕ್ರಷರ್ ಸ್ಥಾಪನೆಗೆ ಅನಿರ್ದಿಷ್ಟಾವಧಿ ಧರಣಿ!

ರಾಜ್ಯLATEST NEWS

S3 Media House

8/25/20261 min read

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್​ ಬಚ್ಚೇಗೌಡ ಬೆಂಬಲಿಗೆ ಎನ್ನಲಾದ ನರೇಂದ್ರ ಎಂ.ಸಿ ಮಾಲೀಕತ್ವದ ಕಷರ್​ ವಿರುದ್ಧ ರೈತರು ಆಕ್ರೋಶಗೊಂಡು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಘಟನೆ ನಡೆದಿದೆ.

ಕೋಲಾರ ತಾಲೂಕಿನ ವೇಮಗಲ್ ಹೋಬಳಿ ಸೀತಿ ಗ್ರಾಮದ ಸರ್ವೇ ನಂ.19ರ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ಜಲ್ಲಿ ಕ್ರಷರ್ ಘಟಕ ಸ್ಥಾಪನೆಯಾಗಿದ್ದು, ಈ ಭಾಗದ ತಿಪ್ಪೇನಹಳ್ಳಿ, ಮಾರ್ಜೇನಹಳ್ಳಿ ಹಾಗೂ ಮಠಪುರ ಗ್ರಾಮಸ್ಥರು ಜಾನುವಾರುಗಳೊಂದಿಗೆ ಕ್ರಷರ್ ಮುಂಭಾಗದ ರಸ್ತೆಯ ಪಕ್ಕದಲ್ಲಿ ಅಡುಗೆ ಮಾಡಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಜೊತೆಗೆ ಕೇವಲ 6 ಎಕರೆಗೆ ಮಾತ್ರ ಕ್ರಷರ್​ ನಡೆಸಲು ಅನುಮತಿ ಪಡೆದಿದ್ದು, ಸುತ್ತಮುತ್ತಲಿನ ಗೋಮಾಳ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕ್ರಷರ್​ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಈ ಕ್ರಷರ್​ನಿಂದ ಬರುವ ಧೂಳಿನಿಂದ ಇಲ್ಲಿನ ರೈತರು ಬದುಕು ಮೂರಾಬಟ್ಟೆಯಾಗಿದ್ದು, ರೈತರು ಬೆಳೆದ ಬೆಳೆಗಳ ಮೇಲೆ ಕ್ರಷರ್​ನಿಂದ ಬರುವ ಧೂಳು ಬೀಳುತ್ತಿದ್ದು ಬೆಳೆಗಳು ಹಾಳಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿಗೆ ಯೋಗ್ಯವಾದ ಹಾಗೂ ಗೋವುಗಳ ಮೇವಿಗಾಗಿ ಮೀಸಲಿರಿಸಿರುವ ಜಾಗದಲ್ಲಿ ಕ್ರಷರ್​ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ. ಸುಮಾರು 20 ಎಕರೆಯಲ್ಲಿ ಕ್ರಷರ್​ ನಡೆಸುತ್ತಿದ್ದು, ಈ ಕ್ರಷರ್​ಗೆ ನೀಡಿರುವ ಅನುಮತಿಯನ್ನು ಕೂಡಲೇ ರದ್ದು ಮಾಡಬೇಕಾಗಿ ರೈತರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದರು. ಜೊತೆಗೆ ಅಕ್ರಮವಾಗಿ ಕ್ರಷರ್​​ಗೆ ಯಾವ ರೀತಿ ಅನುಮತಿ ನೀಡಿದ್ದಾರೆ ಎಂದು ಕೂಡಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನಮ್ಮನ್ನು ಸಂಪರ್ಕಿಸಲು ದಯವಿಟ್ಟು ಈ ವಿವರಗಳನ್ನು ಬಳಸಿ

s3kannadanews@gmail.com

+91 9902544556

© 2026 S3 Media House. All Rights Reserved.

ನಮ್ಮ ನ್ಯೂಸ್ ಅಪ್ಡೇಟ್ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ

ನಮ್ಮ ವಾಟ್ಸ್ ಆಪ್ ಚಾನೆಲ್ ಗೆ ಸೇರಲು ಈ ಬಟನ್ ಕ್ಲಿಕ್ ಮಾಡಿ ಕ್ಷಣ ಕ್ಷಣದ ಆಪ್ಡೆಟ್ ಪಡೆಯಿರಿ.