ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ! ಈತ ಮಾಡಿದ್ದ ಸಾಲ ಎಷ್ಟು ಗೊತ್ತಾ?
LATEST NEWSರಾಜ್ಯಅಪರಾಧ
S3 Media House
8/26/20261 min read


ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಲುಬುರುಗಿ ಜಿಲ್ಲೆ ಆಳಂದ ತಾಲ್ಲೂಕಿನ ಕಣಮಸ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಾಂತಯ್ಯ ಮಠಪತಿ(65) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ.
ಈ ರೈತ ಕೆಜಿಬಿ ಬ್ಯಾಂಕ್ ನಲ್ಲಿ 1 ಲಕ್ಷ ಹಾಗೂ ಖಾಸಗೀಯಾಗಿ 9 ಲಕ್ಷ ಸಾಲ ಮಾಡಿಕೊಂಡಿದ್ದನಂತೆ. ಪ್ರಸಕ್ತ ವರ್ಷ ಸರಿಯಾದ ಮಳೆಯಾಗದೆ ರೈತ ಬೆಳೆದ ಬೆಳೆ ಕೈಗೆ ಸಿಗದಿದ್ದ ಕಾರಣ ಮನನೊಂದು ರೈತ ನೇಣಿಗೆ ಕೊರಳೊಡ್ಡಿದ್ದಾನೆ. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


