ಮದುವೆಯಾಗಲು ಹೆಣ್ಣು ಬೇಕೆಂದು ಯುವಕ ಏನು ಮಾಡಿದ ನೋಡಿ!
ಕೆಲ ಕಾಲ ಇಡೀ ಪಟ್ಟಣವನ್ನೇ ಕುತೂಹಲ ಮತ್ತು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು!
ಇತರೆLATEST NEWS
S3 Media Hosue
7/10/20261 min read


ವಿವಾಹಕ್ಕಾಗಿ ಹೆಣ್ಣು ಬೇಕೆಂದು ಆಗ್ರಹಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಇಂಡಿ ಪಟ್ಟಣದಲ್ಲಿರುವ ಬಿಎಸ್ಎನ್ಎಲ್ (BSNL) ಮೊಬೈಲ್ ಟವರ್ ಏರಿದ ಯುವಕ, ತನಗೆ ಮದುವೆ ಮಾಡಲು ಹೆಣ್ಣು ಹುಡುಕಿಕೊಡಬೇಕು ಎಂದು ಒತ್ತಾಯಿಸಿ ಕೆಲಕಾಲ ರಾದ್ದಾಂತ ಸೃಷ್ಟಿಸಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಾರ್ವಜನಿಕರು ಟವರ್ ಸುತ್ತಮುತ್ತ ಸೇರಿ ಯುವಕನನ್ನು ನೋಡಲು ಮುಗಿಬಿದ್ದರು.
ಯುವಕನ ಹೆಸರು ಹಾಗೂ ವಿಳಾಸದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಯುವಕನನ್ನು ಮನವೊಲಿಸುವ ಕಾರ್ಯ ಕೈಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆ ಕೆಲಕಾಲ ಇಂಡಿ ಪಟ್ಟಣದಲ್ಲಿ ಆತಂಕ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಈ ಸಂಬಂಧ ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ಲಭ್ಯವಾಗಬೇಕಿದೆ.


