ವಿಧಾನ ಪರಿಷತ್ ಸದಸ್ಯ ಕಿಡ್ನಾಪ್ : ಹಣಕ್ಕೆ ಬೇಡಿಕೆಯಿಟ್ಟು ಎಸ್ಕೇಪ್!
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆರೋಪಿಗಳಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು.
ರಾಜಕೀಯಅಪರಾಧ
Sridhar M Budigere
6/2/20261 min read


ಮಾಜಿ ವಿಧಾನ ಪರಿಷತ್ ಸದಸ್ಯನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ಎಮ್ ಎಲ್ ಸಿ ದಯಾನಂದರೆಡ್ಡಿಯನ್ನು ಕಿಡ್ನಾಪ್ ಮಾಡಿದ್ದ ಕಳ್ಳರು 3 ಕೋಟಿ ಹಣಕ್ಕೆ ಕೇಳಿದ್ದು, ತದನಂತರ 2 ಕೊಟಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ನಾಳೆ ಬೆಳಿಗ್ಗೆ 2 ಕೋಟಿ ಹಣ ನೀಡುವಂತೆ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅಂದಹಾಗೆ ತಡ ರಾತ್ರಿ 12.15 ರ ಸಮಯದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ದಯಾನಂದರೆಡ್ಡಿ ಗೋಲ್ಡ್ ಕಾಯಿನ್ ಕ್ಲಬ್ ನಿಂದ ಹೊರಡುವಾಗ ಹಿಲಲಿಗೆ ಬಳಿ ಇಬ್ಬರು ಬೈಕ್ ಸವಾರರು ಕಾರನ್ನು ಅಡ್ಡಗಟ್ಟಿದ್ದಾರೆ. ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿದ್ದಾರೆ. ಕಾರ್ ಡೋರ್ ಲಾಕ್ ತೆರೆಯುತ್ತಿದ್ದಂತೆ ಓರ್ವ ಕಾರಿನೊಳಗೆ ನುಗ್ಗಿದ್ದಾನೆ.
ಗನ್ ತೋರಿಸಿ ತಾನು ಹೇಳಿದ ಮಾರ್ಗದಲ್ಲಿ ಕಾರು ಚಲಿಸುವಂತೆ ಸೂಚಿಸಿದ್ದಾನೆ. ಇದೇ ಸಮಯದಲ್ಲಿ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಕಾರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆಯ ಯ ಕೆಎಚ್ಬಿ ಬಡಾವಣೆ ಬಳಿ ಕರೆದುಕೊಂಡು ಹೋಗಿ ನಿನ್ನನ್ನು ಕೊಲ್ಲಲು 10 ಕೋಟಿ ಸುಫಾರಿ ಕೊಟ್ಟಿದ್ದಾರೆ ಎಂದು ಕುತ್ತಿಗೆ ಮೇಲೆ ಗನ್ ಇಟ್ಟು ಬೆದರಿಸಿದ್ದಾರೆ.
ಈ ವೇಳೆ ನನ್ನನ್ನು ಕೊಲ್ಲಬೇಡಿ ಎಂದು ಬೇಡಿಕೊಂಡಿರುವ ಎಮ್ಎಲ್ಸಿ ಹಣ ನೀಡುವುದಾಗಿ ಹೇಳಿದ್ದಾರೆ. 3 ಕೋಟಿ ಹಣ ನೀಡಿದರೆ ನಿನ್ನನ್ನು ಬಿಟ್ಟು ಬಿಡುವುದಾಗಿ ಕಿಡ್ನಾಪರ್ಸ್ ಹೇಳಿದ್ದಾರೆ. ಆದರೆ ದಯಾನಂದರೆಡ್ಡಿ 2 ಕೋಟಿ ಹಣ ನೀಡುವುದಾಗಿ ಹೇಳಿದ್ದಾರೆ. ಇದೀಗ ನನ್ನ ಬಳಿ ಹಣವಿಲ್ಲ ನಾಳೆ ಬೆಳಿಗ್ಗೆ ಬ್ಯಾಂಕ್ ತೆರೆದಾಗ ಹಣ ನೀಡುವುದಾಗಿ ಮನವಿ ಮಾಡಿದ್ದಾರೆ. ಕಾರಣ ಕಿಡ್ನಾಪರ್ಸ್ ಎಮ್ಎಲ್ಸಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ದಯಾನಂದರೆಡ್ಡಿ ದೂರು ದಾಖಲು ಮಾಡಿದ್ದು, ಪೊಲೀಸರು ಖತರ್ನಾಕ್ ಕಿಡ್ನಾಪರ್ಸ್ಗಳಿಗಾಗಿ ಶೋಧ ನಡೆಸಿದ್ದಾರೆ.




